

6th September 2025

ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮೂರನೇ ದಿನ ಶುಕ್ರವಾರ ದಿನಾಂಕ: 5-9-2025 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ಶ್ರೀಗುರು ಶಂಕರ ಲಿಂಗೇಶ್ವರ ಗುರುವರ್ಯರ ಮೂರ್ತಿಗೆ ಮಹಾರುದ್ರಾಭಿಷೇಕದ
ಪೂಜೆಯೊಂದಿಗೆ ಅಲಂಕಾರ ಮಾಡಲಾಯಿತು.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ ಬೆಟ್ಟದಲ್ಲಿ ಸತತ 24 ತಾಸು ಭಜನೆ ಕಾರ್ಯಕ್ರಮದ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ
ಸುರೇಶ ಸ್ವಾಮಿಗಳು, ವೀರಬಸಯ್ಯ ಸ್ವಾಮಿಗಳು,
ಕಳಕಪ್ಪ ಸೂಡಿ, ಶರಣಪ್ಪ ನೆರೆಬೆಂಚಿ, ಕಳಕಪ್ಪ ಪುರದ್, ಬಸವರಾಜ ಬಿದರಕುಂದಿ, ಫಕೀರಪ್ಪ ಈಳಗೇರ್, ಹುಸೇನ್ ಸಾಬ್ ಕೋಳೂರ್, ಶಿವಾನಂದ್ ಹಿರೇಮಠ ಹಾಗೂ ಇತರರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆಯ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.